Thursday, 27 June 2013

ದೇವರ ಕಾಣುವ ಹುಚ್ಚು ಮತ್ತು ಆ ರಾತ್ರಿ...



  ಆಗ ನಾವ್ ಇನ್ನು 16 ಪೋರರು. ಮುಖದ ಮೇಲೆ ಮೀಸೆ ಮೂಡಲು ಆರಂಭಿಸಿದ್ದವು. ನಾವ್ ನಾಲ್ಕ ಜನ ಫ್ರೇಂಡ್ಸ್. ಓಣಿಯ ತುಂಬೆಲ್ಲ ಉಡಾಳ ಕಂಪನಿ ಎನ್ನುತ್ತಿದ್ದರು. ನಮ್ಮೂಗಳ ಕಿತಾಪತಿಗಳಿಗೂ ಕೊನೆಯೇ ಇರಲಿಲ್ಲ. ಕೆಲವೊಂದು ಸಾರಿ ಕುತೂಹಲದ ಸಂಗತಿಗಳನ್ನು ಬೇಧಿಸಲು ಪ್ರಯತ್ನಸಿದ್ದು ಉಂಟು. ಅಂತಹ ಪ್ರಯತ್ನಗಳಿಂದ ಮೈ ತುಂಬಾ ಬಾಸುಂಡೆ ಬರುವ ಹಾಗೆ ತದಕಿಸಿಕೊಂಡಿದ್ದು ಇದೆ. ಅವುಗಳಲ್ಲೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
 ನಮ್ಮ ಹಳ್ಳಿ ಮನೆಗಳೆಂದರೆ ಅಷ್ಟಕಷ್ಟೆ. ಇತ್ತ ತೀರ ದೊಡ್ಡದು ಅಲ್ಲದ, ತೀರ ಸಣ್ಣದು ಅಲ್ಲದ ಮನೆಗಳು. ಅದರಲ್ಲೂ ನಮ್ಮ ಓಣಿಯಲ್ಲಿರುವಂತಹ ಪ್ರತಿ ಮನೆಗಳು ಚಿಕ್ಕವು. ಆದ್ದರಿಂದ ಗಂಡಸರೆಲ್ಲರೂ ಮಲಗಲು ಹೆಚ್ಚಾಗಿ ಗುಡಿಗಳನ್ನೆ ಅವಲಂಭಿಸಿದ್ದರು. ಹಾಗೆಯೇ ನಾವು ಸ್ವಲ್ಪ ವಯಸ್ಸಿಗೆ ಬಂದ ನಂತರ ಗುಡಿಗೆ ಮಲಗಲು ಹೋಗುತ್ತಿದ್ದೆವು. ನಮ್ದು ನಾಲ್ಕು ಜನರ ಗುಂಪ್ಪು. ಎಲ್ಲರೂ ಒಂದೆ ಕಡೆ ಮಲಗುತ್ತಿದ್ದೆವು. ನಾವು  ಮಲಗಲು ಹೋಗುತ್ತಿದ್ದದ್ದು ಬಸವೇಶ್ವರ ಗುಡಿಗೆ. ಅದು ನಮ್ಮೂರಿನ ಫೇಮಸ್ ದೇವರುಗಳಲ್ಲಿ ಒಂದು.
  ಆದರೆ, ಈ ದೇವರ ಬಗ್ಗೆ ಒಂದು ವಿಚಿತ್ರ ಸುದ್ದಿ ಹರಡಿತ್ತು. ಅದೇನಂದರೆ: ಬಸವೇಶ್ವರ ಸತ್ತುಳ್ಳವ. ಅವಾ ರಾತ್ರಿಯಲ್ಲ ಕಾಲಿಗೆ ಗೆಜ್ಜೆ ಕಟಗೊಂಡು, ನಮ್ಮ ಓಣಿ ಮತ್ತು ಊರನ್ನು ಕಾಯ್ತಾನೆ. ಎಂದು ಆಗಾಗ ಜನ ಆಡಿಕೊಳ್ಳತ್ತಿದ್ದರು. ನಾವು ಅದನ್ನು  ಕನ್ಫಮರ್್ಗಾಗಿ ಅಜ್ಜಿಯನ್ನು ಕೇಳಿದೆವು. ಅವಳು ನಿಜ ಎಂದಳು. ಆಗ ನಮ್ಮಲ್ಲಿ ಇನ್ನು ಕುತೂಹಲ ಹೆಚ್ಚಾಯಿತು.
 ಎಲ್ಲರೂ ಮಾತನಾಡಿಕೊಂಡೆವು. ಬಸವಣ್ಣ ದೇವ್ರು ಹೇಗಿದ್ದಾನೆ ಎಂಬುದು ಈ ರಾತ್ರಿ ನೋಡುವುದೆ ಎಂದು. ರಾತ್ರಿಯಲ್ಲ ಎಚ್ಚರ ಇರಬೇಕೆಂದು, ಹಗಲೆಲ್ಲ ನಿದ್ದೆ ಮಾಡಿದೆವು. ವಿಚಾರ ಮಾಡಿದೆವು. ದೇವ್ರು ಅಂದ್ರೇ ಹೇಗಿರ್ತಾನೆ. ಅವನು ಊರು ಕಾಯುವುದು ಅಂದ್ರೆ ಏನು. ಅವನೇನ ಕೈಯಲ್ಲಿ ಸ್ಟೀಕ್ ಹಿಡಿದಿರ್ತಾನಾ! ಅಥವಾ ಗೂಖರ್ಾ ತರ ಡ್ರೇಸ್ ಮತ್ತು ವ್ಹಿಜಿಲ್ ಹೊಡೆಯುತ್ತಾ ಬರ್ತಾನಾ! ಎಂಬ ಮುಂತಾದ ಪ್ರಶ್ನೆಗಳು ತಲೆಯಲ್ಲಿ ಗಿರಿಕಿ ಹೊಡೆಯತೊಡಗಿದವು. ಇವಕ್ಕೆಲ್ಲ ಉತ್ತರ ಬೇಕು ಅಂದ್ರೆ ನಾವ್ ಇವತ್ತು ದೇವ್ರು ಅದ್ಹೇಗೆ ಹೊರಗಡೆ ಹೋಗ್ತಾನೆ ನೋಡಲೇಬೇಕೆಂದು ನಿರ್ಧರಿಸಿದೆವು.
 ರಾತ್ರಿ 11ಗಂಟೆಗೆ ನಮ್ಮ ಕಾರ್ಯಚರಣೆ ಆರಂಭವಾಯಿತು. ಗುಡಿಯಲೆಲ್ಲ ಜನ ಮಲಗಿದ್ದರು. ನಾವ್ ನಾಲ್ಕು ಜನ ನಾಲ್ಕು ದಿಕ್ಕಿನ ಮರೆಗೆ ಕುಳಿತ್ತಿದ್ದೆವು. ನಮ್ಮಜ್ಜಿ ಹೇಳಿದ್ದು ನೆನಪಾಯಿತು. ಮಧ್ಯರಾತ್ರಿ 12ಗಂಟೆ ನಂತರ ಬರ್ತಾನೆ ಎಂದು. 12ಗಂಟೆ ಆಯಿತು. ನೋಡುವ ಹಂಬಲ ಹೆಚ್ಚಾಯಿತು. ಸಮಯ ಸರಿಯುತ್ತಲೇ ಇತ್ತು. ದೇವ್ರು ಆಗ ಬರ್ತಾನೆ. ಈಗ ಬರ್ತಾನೆ ಅಂತ ಕಾಯ್ದು ಸುಸ್ತಾಯಿತು. ಬರಲೇ ಇಲ್ಲ.
 ಪೂತರ್ಿ ನಿಶ್ಯಬ್ದ ಆವರಿಸಿತ್ತು. ಕರೆಂಟ್ ಬೇರೆ ಹೋಗಿತ್ತು. ನಾನು ಸ್ವಲ್ಪ ಕೀಟ್ಲೆ ಮಾಡಲೆಂದು ವಿಚಿತ್ರವಾಗಿ ಅರಿಚಿದೆ. ಉಳಿದ ಮೂವರ ಜಂಗಾಬಲವೇ ಕುಸಿಯಿತು. ಅವರು ಭಯಪಟ್ಟಿದ್ದು ನೋಡಿ, ಮತ್ತಷ್ಟು ಸಂತೋಷವಾಯಿತು. ಅದೇ ಖುಷಿಯಲ್ಲಿಯೇ ಇಡೀ ಓಣಿಗೆ ಕೇಳುವ ಹಾಗೆ ಕಿಟಾರನೆ ಚೀರಿದೆ. ಗುಡಿಯಲ್ಲಿ ಮಲಗಿದ್ದ ಜನರೆಲ್ಲ ಎದ್ದು ಕುಳಿತರು. ಏನದು ಶಬ್ದ ಎಂದು ಒಬ್ಬರಿಗೊಬ್ಬರು ಕೇಳತೊಡಗಿದರು. ಆದರೆ, ನಾ ಚೀರಿದ ಶಬ್ದಕ್ಕೆ ಇನ್ನೊಂದು ಮೂಲೆಯಲ್ಲಿದ್ದ ಗೆಳೆಯನಿಗೆ ಚಡ್ಡಿಯಲ್ಲಿಯೇ ಒಂದು ಎರಡು ಆಗಿತ್ತು. ಇದನ್ನ ಕಂಡ ಅಲ್ಲಿಯವರು ಅವನ ಪರಸ್ಥಿತಿ ನೋಡಿ ವಿಚಾರಿಸಿದರು. ಅವನು ನಾವು ಮಾಡ ಹೊರಟಿದ್ದ ಕಾರ್ಯಚರಣೆಯನ್ನೆಲ್ಲ ಅವರಿಗೆ ಹೇಳಿದನು. ಅವರು, ನಾವು ದೇವ್ರನ್ನು ಕಾಣಬೇಕೆಂಬ ಹುಚ್ಚು ಹಟಕ್ಕೆ ಎರಡೆರಡು ಏಟು ಹೊಡೆದರು. ದೇವ್ರು ಯಾರ ಕಣ್ಣಿಗೂ ಕಾಣಿಸೊಲ್ಲ ಎಂದು ಬಯ್ದರು. ದೇವ್ರನ್ನು ನೋಡಬೇಕೆಂಬ ನಮ್ಮ ಹುಚ್ಚು ಕಲ್ಪನೆಗೆ ಫುಲ್ಸ್ಟಾಪ್ ಹಾಕಿ ಕಂಬಳಿ ಹೊದ್ದು ಮಲಗಿಕೊಂಡೆವು.

No comments:

Post a Comment