Thursday, 27 June 2013


ಅವನು ನಮ್ಮೊಂದಿಗಿಲ್ಲ ಕಣ್ಣೀರು ನಿಂತಿಲ್ಲ...


ಆತ ಜರ್ನಲಿಸ್ಟ್ ಆಗಬೇಕು ಅನ್ನೋ ಆಸೆ ಹೊಂದಿದ್ದ. ಗುಲ್ಬಗರ್ಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ಸೇರಿದ್ದ. ಸಮೂಹ ಮಾಧ್ಯಮ ಲೋಕದಲ್ಲಿನ ನೂರಾರು ಕನಸುಗಳನ್ನು ಕಂಡಿದ್ದ. ಇದಕ್ಕಾಗಿ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದ. ಪಾದರಸದಂತಿದ್ದ.  ತನ್ನ ಗೆಳೆಯರೊಂದಿಗೆ  ಉಪನ್ಯಾಸಕರಿಗೆ ಬಹಳ ಆತ್ಮೀಯನಾಗಿದ್ದ.
ಆತ ಮಿತ ಮಾತುಗಾರ. ಯಾರ ಜೊತೆಗೂ ಹೆಚ್ಚಾಗಿ ಮಾತನಾಡಿದವನಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ, ಸುಖಿಯಂತಿದ್ದ. ದಿನಗಳು ಉರಿಳಿದವು. ವರ್ಷವಾಯಿತು. ಈತ ದ್ವಿತೀಯ ವರ್ಷಕ್ಕೆ ಕಾಲಿಟ್ಟ. ವಿಶ್ವವಿದ್ಯಾಲಯಕ್ಕೆ ತನ್ನಂತೆ ಪತ್ರಿಕೋದ್ಯಮದಲ್ಲಿ ಹಲವಾರು ಆಸೆಗಳನ್ನು ಇಟ್ಟುಕೊಂಡ ಬಂದ ವಿದ್ಯಾಥರ್ಿಗಳಿಗೆ ಸ್ವಾಗತ ಕಾರ್ಯಕ್ರಮ ಇಟ್ಟುಕೊಂಡೆವು. ಅದರ ನೇತೃತ್ವ ವಹಿಸಿಕೊಂಡವನು ಆತನೆ. ನಾವು ಮಾಡಬೇಕಾದ ಕಾರ್ಯಗಳನ್ನೆಲ್ಲ ಅವನೊಬ್ಬನೆ ಮಾಡಿದ. ನಾವು ಕೇವಲ ಪ್ರೇಕ್ಷಕ ಗೊಂಬೆಯಾಗಿದ್ದೆವು. ಆ ಕಡೆಗೂ, ಈ ಕಡೆಗೂ ಅವನೆ. ತುಂಬಾ ಉತ್ಸಾಹದಿಂದ ಓಡಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ. ಅವನು ಅಷ್ಟೆಲ್ಲ ಮಾಡಿದ್ದು ನೋಡಿ ಆಶ್ಚರ್ಯವಾಗಿತ್ತು. ಸಂತೋಷಕ್ಕಾಗಿ, ಕಾರ್ಯಕ್ರಮದ ನೆನಪಿಗಾಗಿ ಅವನೊಂದಿಗೆ ಎಲ್ಲರೂ ಫೊಟೋ ತೆಗೆಸಿಕೊಂಡು ಮನೆಗೆ, ಹಾಸ್ಟೆಲ್ಗಳಿಗೆ ಹಿಂದಿರುಗಿದೆವು.
ಅಂದೇ ಸಂಜೆ ಆತನ ಊರಿನ ಮನೆಯಿಂದ ಕಾಲ್ ಬಂದಿತು. ರಿಸೀವ್ ಮಾಡಿ ಮಾತನಾಡಿದಾಗ 'ಅಜ್ಜನಿಗೆ ಆರಾಮ ಇಲ್ಲ. ಸೀರಿಯಸ್ಸ್ ಬೇಗನೇ ಬಾ' ಎಂದು ತಂಗಿ ಹೇಳಿದಳು. ಇದರಿಂದ ಕೊಂಚ ವಿಚಲಿತನಂತೆ ಕಂಡ ಅವನು ಆ ರಾತ್ರಿನೇ ಹೊರಡಬೇಕೆಂದ. ರಾತ್ರಿ ಬೇಡ ಬೆಳಿಗ್ಗೆ ಹೋಗು ಎಂಬ ಗೆಳೆಯರ ಸಲಹೆಯಂತೆ ಮಾರನೆ ದಿನ ಬೆಳಿಗ್ಗೆ ಐದು ಗಂಟೆಗೆ ತನ್ನ ಸ್ವಂತ ಬೈಕನ್ನೇರಿ ಊರಿಗೆ ಹೋದ. ವಿಶ್ವವಿದ್ಯಾಲಯದಿಂದ ನೂರು ಕಿ.ಮೀ. ಮುಂದೆ ಸಾಗಿದ್ದ. ಆದರೆ ಯಾರು ಊಹಿಸಲಾಗದಂತ ಘಟನೆ ಸಂಭವಿಸಿತ್ತು. ಖಾಸಗಿ ಬಸ್ ಮತ್ತು ಅವನ ಬೈಕ್ ನಡುವೆ ಅಪಘಾತದಿಂದಾಗಿ ವಿಧಿಯ ಆಟಕ್ಕೆ ಅವನು ಬಲಿಯಾದ.
ಈ ವಿಷಯ ಗೊತ್ತಾದ ಗೆಳೆಯರಿಗೆ, ಉಪನ್ಯಾಸಕರಿಗೆ ಒಮ್ಮೇಲೇ ಶಾಕ್! ನಿನ್ನೆ ನಮ್ಮ ಜೊತೆಗೆ ಓಡಾಡಿಕೊಂಡಿದ್ದ. ಇವತ್ತು ಹೀಗೆಲ್ಲ ಎಂದರೆ, ನಂಬಲಾಗಲಿಲ್ಲ. ಆದರೂ ಅದು ನಿಜವಾಗಿತ್ತು. ನಮ್ಮ ಆತ್ಮೀಯ ಸ್ನೇಹಿತ ನಮ್ಮನ್ನಗಲಿದ್ದ. ಎಲ್ಲೆಲ್ಲಿಂದಲೋ ಬಂದವರು. ಒಂದು ವರ್ಷದಲ್ಲಿ ಅದೆಷ್ಟೋ ಅನ್ಯೋನ್ಯ ಮಿತ್ರತ್ವ ಬೆಳೆದಿತ್ತು. ಆ ದುರಂತ ಸಾವು ನಮ್ಮ ಮನಸ್ಸಿನಲ್ಲಿ ಹಚ್ಚಳಿಯದೆ ಉಳಿದಿದೆ. ಒಬ್ಬ ಉತ್ತಮ ಗೆಳೆಯನ ಕಳೆದುಕೊಂಡ ಅನಾಥ ಪ್ರಜ್ಞೆ ನಮ್ಮನ್ನು ಕಾಡುತ್ತಿದೆ. ಆತನ ನಡೆ-ನುಡಿ, ಪ್ರೀತಿ- ವಿಶ್ವಾಸ, ಸ್ನೇಹ ಸಲುಗೆ ನಮ್ಮೊಂದಿಗೆ ಇನ್ನೂ ಜೀವಂತವಾಗಿವೆ.
ನೀನು ನಮ್ಮೊಂದಿಗೆ ಇಲ್ಲದಿದ್ದರೂ, ಆ ದಿನಗಳೆ ಮಾತ್ರ ನೆನಪಾಗಿವೆ ಗೆಳೆಯ ದೊಡ್ಡಬಸಪ್ಪ. ನಿನಗೆ ಪ್ರೀತಿಯ ನಮನಗಳು 

ದೇವರ ಕಾಣುವ ಹುಚ್ಚು ಮತ್ತು ಆ ರಾತ್ರಿ...



  ಆಗ ನಾವ್ ಇನ್ನು 16 ಪೋರರು. ಮುಖದ ಮೇಲೆ ಮೀಸೆ ಮೂಡಲು ಆರಂಭಿಸಿದ್ದವು. ನಾವ್ ನಾಲ್ಕ ಜನ ಫ್ರೇಂಡ್ಸ್. ಓಣಿಯ ತುಂಬೆಲ್ಲ ಉಡಾಳ ಕಂಪನಿ ಎನ್ನುತ್ತಿದ್ದರು. ನಮ್ಮೂಗಳ ಕಿತಾಪತಿಗಳಿಗೂ ಕೊನೆಯೇ ಇರಲಿಲ್ಲ. ಕೆಲವೊಂದು ಸಾರಿ ಕುತೂಹಲದ ಸಂಗತಿಗಳನ್ನು ಬೇಧಿಸಲು ಪ್ರಯತ್ನಸಿದ್ದು ಉಂಟು. ಅಂತಹ ಪ್ರಯತ್ನಗಳಿಂದ ಮೈ ತುಂಬಾ ಬಾಸುಂಡೆ ಬರುವ ಹಾಗೆ ತದಕಿಸಿಕೊಂಡಿದ್ದು ಇದೆ. ಅವುಗಳಲ್ಲೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
 ನಮ್ಮ ಹಳ್ಳಿ ಮನೆಗಳೆಂದರೆ ಅಷ್ಟಕಷ್ಟೆ. ಇತ್ತ ತೀರ ದೊಡ್ಡದು ಅಲ್ಲದ, ತೀರ ಸಣ್ಣದು ಅಲ್ಲದ ಮನೆಗಳು. ಅದರಲ್ಲೂ ನಮ್ಮ ಓಣಿಯಲ್ಲಿರುವಂತಹ ಪ್ರತಿ ಮನೆಗಳು ಚಿಕ್ಕವು. ಆದ್ದರಿಂದ ಗಂಡಸರೆಲ್ಲರೂ ಮಲಗಲು ಹೆಚ್ಚಾಗಿ ಗುಡಿಗಳನ್ನೆ ಅವಲಂಭಿಸಿದ್ದರು. ಹಾಗೆಯೇ ನಾವು ಸ್ವಲ್ಪ ವಯಸ್ಸಿಗೆ ಬಂದ ನಂತರ ಗುಡಿಗೆ ಮಲಗಲು ಹೋಗುತ್ತಿದ್ದೆವು. ನಮ್ದು ನಾಲ್ಕು ಜನರ ಗುಂಪ್ಪು. ಎಲ್ಲರೂ ಒಂದೆ ಕಡೆ ಮಲಗುತ್ತಿದ್ದೆವು. ನಾವು  ಮಲಗಲು ಹೋಗುತ್ತಿದ್ದದ್ದು ಬಸವೇಶ್ವರ ಗುಡಿಗೆ. ಅದು ನಮ್ಮೂರಿನ ಫೇಮಸ್ ದೇವರುಗಳಲ್ಲಿ ಒಂದು.
  ಆದರೆ, ಈ ದೇವರ ಬಗ್ಗೆ ಒಂದು ವಿಚಿತ್ರ ಸುದ್ದಿ ಹರಡಿತ್ತು. ಅದೇನಂದರೆ: ಬಸವೇಶ್ವರ ಸತ್ತುಳ್ಳವ. ಅವಾ ರಾತ್ರಿಯಲ್ಲ ಕಾಲಿಗೆ ಗೆಜ್ಜೆ ಕಟಗೊಂಡು, ನಮ್ಮ ಓಣಿ ಮತ್ತು ಊರನ್ನು ಕಾಯ್ತಾನೆ. ಎಂದು ಆಗಾಗ ಜನ ಆಡಿಕೊಳ್ಳತ್ತಿದ್ದರು. ನಾವು ಅದನ್ನು  ಕನ್ಫಮರ್್ಗಾಗಿ ಅಜ್ಜಿಯನ್ನು ಕೇಳಿದೆವು. ಅವಳು ನಿಜ ಎಂದಳು. ಆಗ ನಮ್ಮಲ್ಲಿ ಇನ್ನು ಕುತೂಹಲ ಹೆಚ್ಚಾಯಿತು.
 ಎಲ್ಲರೂ ಮಾತನಾಡಿಕೊಂಡೆವು. ಬಸವಣ್ಣ ದೇವ್ರು ಹೇಗಿದ್ದಾನೆ ಎಂಬುದು ಈ ರಾತ್ರಿ ನೋಡುವುದೆ ಎಂದು. ರಾತ್ರಿಯಲ್ಲ ಎಚ್ಚರ ಇರಬೇಕೆಂದು, ಹಗಲೆಲ್ಲ ನಿದ್ದೆ ಮಾಡಿದೆವು. ವಿಚಾರ ಮಾಡಿದೆವು. ದೇವ್ರು ಅಂದ್ರೇ ಹೇಗಿರ್ತಾನೆ. ಅವನು ಊರು ಕಾಯುವುದು ಅಂದ್ರೆ ಏನು. ಅವನೇನ ಕೈಯಲ್ಲಿ ಸ್ಟೀಕ್ ಹಿಡಿದಿರ್ತಾನಾ! ಅಥವಾ ಗೂಖರ್ಾ ತರ ಡ್ರೇಸ್ ಮತ್ತು ವ್ಹಿಜಿಲ್ ಹೊಡೆಯುತ್ತಾ ಬರ್ತಾನಾ! ಎಂಬ ಮುಂತಾದ ಪ್ರಶ್ನೆಗಳು ತಲೆಯಲ್ಲಿ ಗಿರಿಕಿ ಹೊಡೆಯತೊಡಗಿದವು. ಇವಕ್ಕೆಲ್ಲ ಉತ್ತರ ಬೇಕು ಅಂದ್ರೆ ನಾವ್ ಇವತ್ತು ದೇವ್ರು ಅದ್ಹೇಗೆ ಹೊರಗಡೆ ಹೋಗ್ತಾನೆ ನೋಡಲೇಬೇಕೆಂದು ನಿರ್ಧರಿಸಿದೆವು.
 ರಾತ್ರಿ 11ಗಂಟೆಗೆ ನಮ್ಮ ಕಾರ್ಯಚರಣೆ ಆರಂಭವಾಯಿತು. ಗುಡಿಯಲೆಲ್ಲ ಜನ ಮಲಗಿದ್ದರು. ನಾವ್ ನಾಲ್ಕು ಜನ ನಾಲ್ಕು ದಿಕ್ಕಿನ ಮರೆಗೆ ಕುಳಿತ್ತಿದ್ದೆವು. ನಮ್ಮಜ್ಜಿ ಹೇಳಿದ್ದು ನೆನಪಾಯಿತು. ಮಧ್ಯರಾತ್ರಿ 12ಗಂಟೆ ನಂತರ ಬರ್ತಾನೆ ಎಂದು. 12ಗಂಟೆ ಆಯಿತು. ನೋಡುವ ಹಂಬಲ ಹೆಚ್ಚಾಯಿತು. ಸಮಯ ಸರಿಯುತ್ತಲೇ ಇತ್ತು. ದೇವ್ರು ಆಗ ಬರ್ತಾನೆ. ಈಗ ಬರ್ತಾನೆ ಅಂತ ಕಾಯ್ದು ಸುಸ್ತಾಯಿತು. ಬರಲೇ ಇಲ್ಲ.
 ಪೂತರ್ಿ ನಿಶ್ಯಬ್ದ ಆವರಿಸಿತ್ತು. ಕರೆಂಟ್ ಬೇರೆ ಹೋಗಿತ್ತು. ನಾನು ಸ್ವಲ್ಪ ಕೀಟ್ಲೆ ಮಾಡಲೆಂದು ವಿಚಿತ್ರವಾಗಿ ಅರಿಚಿದೆ. ಉಳಿದ ಮೂವರ ಜಂಗಾಬಲವೇ ಕುಸಿಯಿತು. ಅವರು ಭಯಪಟ್ಟಿದ್ದು ನೋಡಿ, ಮತ್ತಷ್ಟು ಸಂತೋಷವಾಯಿತು. ಅದೇ ಖುಷಿಯಲ್ಲಿಯೇ ಇಡೀ ಓಣಿಗೆ ಕೇಳುವ ಹಾಗೆ ಕಿಟಾರನೆ ಚೀರಿದೆ. ಗುಡಿಯಲ್ಲಿ ಮಲಗಿದ್ದ ಜನರೆಲ್ಲ ಎದ್ದು ಕುಳಿತರು. ಏನದು ಶಬ್ದ ಎಂದು ಒಬ್ಬರಿಗೊಬ್ಬರು ಕೇಳತೊಡಗಿದರು. ಆದರೆ, ನಾ ಚೀರಿದ ಶಬ್ದಕ್ಕೆ ಇನ್ನೊಂದು ಮೂಲೆಯಲ್ಲಿದ್ದ ಗೆಳೆಯನಿಗೆ ಚಡ್ಡಿಯಲ್ಲಿಯೇ ಒಂದು ಎರಡು ಆಗಿತ್ತು. ಇದನ್ನ ಕಂಡ ಅಲ್ಲಿಯವರು ಅವನ ಪರಸ್ಥಿತಿ ನೋಡಿ ವಿಚಾರಿಸಿದರು. ಅವನು ನಾವು ಮಾಡ ಹೊರಟಿದ್ದ ಕಾರ್ಯಚರಣೆಯನ್ನೆಲ್ಲ ಅವರಿಗೆ ಹೇಳಿದನು. ಅವರು, ನಾವು ದೇವ್ರನ್ನು ಕಾಣಬೇಕೆಂಬ ಹುಚ್ಚು ಹಟಕ್ಕೆ ಎರಡೆರಡು ಏಟು ಹೊಡೆದರು. ದೇವ್ರು ಯಾರ ಕಣ್ಣಿಗೂ ಕಾಣಿಸೊಲ್ಲ ಎಂದು ಬಯ್ದರು. ದೇವ್ರನ್ನು ನೋಡಬೇಕೆಂಬ ನಮ್ಮ ಹುಚ್ಚು ಕಲ್ಪನೆಗೆ ಫುಲ್ಸ್ಟಾಪ್ ಹಾಕಿ ಕಂಬಳಿ ಹೊದ್ದು ಮಲಗಿಕೊಂಡೆವು.

Friday, 19 April 2013



ಮಧುರವಾದ ಸ್ನೇಹ....

ಅವನ ಬಗ್ಗೆ ನಾನು ತಿಳಿದುಕೊಂಡ ಭಾವನೆ ತಪ್ಪು ಎಂದು ಈಗ ಅನ್ನಿಸುತ್ತಿದೆ!
ವರ್ಷದ ಹಿಂದೆ ನನ್ನ ಅವನ ಪರಿಚಯವಾಯಿತು. ಇಬ್ಬರೂ ರೂಮೇಟ್. ಒಂದೇ ಕಪಾಟಿನಲ್ಲಿ ಡ್ರೇಸ್ ಕೂಡಿಸಿಟ್ಟಿದ್ದೇವು. ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದೇವು. ಒಂದೇ ಟೇಬಲ್ಗೆ ಎರಡು ಕುಚರ್ಿ ಹಾಕಿಕೊಂಡು ಓದುತ್ತಿದ್ದೇವು, ಬರೆಯುತ್ತಿದ್ದೇವು. ಜೊತೆಗೆ ಒಂದಿಷ್ಟು ಒಂದೊಳ್ಳೆಳ್ಳೆ ವಿಷಯಗಳ ಬಗ್ಗೆ ಚಚರ್ೆ, ಊಟಕ್ಕೆ ಉಪ್ಪಿನಕಾಯಿಯಂತೆ ಹರಟೆಯನ್ನೂ ಹೊಡೆಯುತ್ತಿದ್ದೇವು. ಈಗ ಆ ದಿನಗಳನ್ನು ನೆನಪಿಸಿಕೊಂಡರೆ ಕ್ಷಣ ಕಾಲ ಎನೂ ತೋಚದಂತಾಗಿ, ಮತ್ತೆ ಆ ದಿನಗಳಿಗಾಗಿ ಕಾಯುವಂತಾಗುತ್ತದೆ. ಆದರೆ ಏನು ಮಾಡುವುದು ಕಳೆದು ಹೋದ ಸಮಯ ಮತ್ತೆ ಬಾರದು ಎಂದು ಸುಮ್ಮನಾಗುತ್ತೇನೆ. ಆದರೂ ನೆನಪು ಅಲೆ ಅಲೆಯಾಗಿ ಹೊರ ಬರುತ್ತಲೆ ಇರುತ್ತದೆ.
ಹೌದು. ನೆನಪುಗಳು ಜೀವನದ ದಿಕ್ಕುಗಳನ್ನೆ ಬದಲಿಸುತ್ತವೆ. ಆ ದಿನಗಳನ್ನು ನೆನಪಿಸಿಕೊಂಡರೆ ಯಾವುದೋ ಆಗಾಧ ಶಕ್ತಿ ಕಳದುಕೊಂಡ ಅನುಭವವಾಗುತ್ತಿದೆ. ತಪ್ಪೋ, ಸರಿಯೋ ಎಂಬುದು ಅಂತರಂಗಕ್ಕೂ ಗೊತ್ತಾಗದ ರೀತಿಯಲ್ಲಿ ನಮ್ಮಿಬ್ಬರ ಸ್ನೇಹ ಆ ರೀತಿಯಲ್ಲಿ ಬೆಳೆದಿತ್ತು. ನಿಜವಾಗಲೂ ನಮ್ಮದು ಅನನ್ಯ ಮಿತ್ರತ್ವ. `ಸಮಾನವಾದ ಗುಣಶೀಲರಲ್ಲಿ ಮಿತ್ರತ್ವ ಶೋಭಿಸುತ್ತದೆ' ಎನ್ನುತ್ತಾರೆ ಮಹಾತ್ಮ ಗಾಂಧಿಜಿಯವರು. ಅವರು ಹೇಳಿದ ಮಾತನ್ನು ಪುಸ್ತಕದಲ್ಲಿ ಓದಿದ್ದೆ. ನಮ್ಮಿಬ್ಬರ ಆತ್ಮೀಯ ಮಧುರ ಭಾವನೆಗಳಿಂದ ನನ್ನ ಜೀವನದಲ್ಲಿ ಅನುಭವಿಸಿದಂತಾಗಿದೆ.
ಇಬ್ಬರ ಮಧ್ಯೆ ಎಷ್ಟೇ ಗಾಢವಾದ ಪ್ರೇಮ, ಸ್ನೇಹ ಇದ್ದರೂ ಆಗಾಗ ಬಿರುಗಾಳಿಯಂತೆ ವೈ ಮನಸ್ಸು ಬರುತ್ತಿರುತ್ತದೆ. ನಮ್ಮ ಸ್ನೇಹದಲ್ಲೂ ಅಂತಹದೊಂದು ಘಟನೆ ನಡೆಯಿತು. ಸಣ್ಣ ಪುಟ್ಟ ವಿಷಯಗಳಿಗೂ ಅವನ ಮನೋಭಾವನೆ ನನಗೆ ಸರಿ ಕಾಣಲಿಲ್ಲ. ಬರ ಬರುತ್ತಾ ಅದು ಹೆಚ್ಚಾಯಿತು. ಅವನ ವರ್ತನೆಯಲ್ಲಿ ಬದಲಾವಣೆಗಳಾದವು. ಇಬ್ಬರ ಮನಸ್ಥಾಪಕ್ಕೂ ಇವೇ ಕಾರಣ. ಅವನು ನನ್ನಲ್ಲಿ ದೋಷಗಳನ್ನು, ನಾನು ಅವನಲ್ಲಿಯ ದೋಷಗಳನ್ನು ದೂಷಿಸಿದೆವು. ಆದರೂ ಆ ದೋಷಗಳನ್ನು ತಿದ್ದಿಕೊಳ್ಳುವ ಹೊತ್ತಿಗೆ ನಮ್ಮಿಬ್ಬರ ಅದ್ಭುತ ಸ್ನೇಹಕ್ಕೊಂದು ಪೂರ್ಣವಿರಾಮ ಬಿತ್ತು.
ಸ್ವಭಾವತಃ ಅವನ ಸ್ವಭಾವವೇ ಹಾಗೆ. ಸ್ವಚ್ಚತೆ ಅಷ್ಟಕಷ್ಟೆ. ರೂಮಿನಲ್ಲಿ ಎಲ್ಲೆಂದರಲ್ಲಿ ವಸ್ತುಗಳನ್ನು ಚಿಕ್ಕಮಕ್ಕಳ ಹಾಗೆ ಚೆಲ್ಲಾಪಿಲ್ಲಿ ಬಿಸಾಕುತ್ತಿದ್ದನು. ಇಂತಹ ಸಣ್ಣ ಪುಟ್ಟ ಕಾರಣಗಳೇ ಅವನೊಡನೆಯ ಸ್ನೇಹದ ಬಿರುಕಿಗೆ ಮೂಲವಾಯಿತು. ಇದು ಹೆಚ್ಚಾಗಲು ತಾಳ್ಮೆ ಇಲ್ಲದಿರುವುದು ಎಂಬ ಅರಿವೂ ನಮ್ಮಿಬ್ಬರಲ್ಲಿ ಬಂತು. ಈಗ ಇಬ್ಬರೂ ಪ್ರತ್ಯೇಕ ರೂಮುಗಳಲ್ಲಿದ್ದೇವೆ. ತಾಳ್ಮೆಯಿಂದ ವತರ್ಿಸುತ್ತಿದ್ದೇವೆ. ಇಬ್ಬರ ಮನಸ್ಥಿತಿ ಒಂದೇ ಅಲ್ಲದಿದ್ದರೂ, ಕೂಡಲೆ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದೇವೆ.
ನಮ್ಮಲ್ಲಿನ ಗುಣ ಗ್ರಹಿಸುವುದಕ್ಕೆ ತಾಳ್ಮೆ ಬೇಕು. ಅದು ಇಲ್ಲದಿದ್ದರೆ ಯಾರನ್ನು ಸುಧಾರಣೆ ಮಾಡಬೇಕೆಂದು ಬಯಸುತ್ತೆವೆಯೋ ಅವನೊಂದಿಗೆ ಸಂಪೂರ್ಣ ಸಲುಗೆಯಿಂದ ಇರಲಾಗುವುದಿಲ್ಲ. ಗೆಳೆತನದಲ್ಲೂ ಸುಧಾರಣೆ ಆಗುವುದಿಲ್ಲ. ಇಬ್ಬರಲ್ಲೂ ಒಬ್ಬರ ಪ್ರಭಾವ ಮತ್ತೊಬ್ಬರ ಮೇಲೆ ಆಗುವುದು. ಅಂತಹ ಅನುಭವ ಇಬ್ಬರ ಗಮನಕ್ಕೂ ಬಂದಿದುಂಟು.
 ಈಗ ಅವನ ಒಡನಾಟದ ಒಂದು ವಸಂತದ ದಿನಗಳ ನೆನಪಾಗುತ್ತಿವೆ. ಬಿಟ್ಟು ಹೋದ ಗೆಳೆಯನ ಬಗ್ಗೆ ಅನಾಥ ಭಾವ ಕಾಡುತ್ತಿದೆ. ಆ ನೆನಪುಗಳು ನನ್ನಲ್ಲಿರುವ ಅಗಾಧ ಸ್ನೇಹಕ್ಕೆ ಇಮ್ಮಡಿಯಾಗುತ್ತಿದೆ. ಜೊತೆಗೆ ಹೃದಯದಲ್ಲಷ್ಟು ಪಶ್ಚಾತಾಪ ಕಳವಳವೂ ಹೆಚ್ಚುತ್ತಿದೆ. ಒಳಗಿನ ಮೌನ ಅಭಿಮಾನದಿಂದ ಅರಳುತ್ತಿದೆ. ಅವನ ಸ್ನೇಹವನ್ನು ಬಿಡೇನು ಎಂದು. ಇಂತಹ ಮೈತ್ರೀಭಾವ ಅಪರೂಪ. ಅದ್ಭುತ ಶಾಂತಿರೂಪವೇ ನಮ್ಮೀ ಸ್ನೇಹ....! ಅರ್ಥ ಮಾಡಿಕೋ.
ಸೃಷ್ಟಿಯಲ್ಲಿ ಅತಿಮಧುರವಾದದ್ದು ಸ್ನೇಹ. ಆ ಸ್ನೇಹ ಮಿತಿಯೊಳಗಿದ್ದರೆ ಸುಂದರ. ಮೀರಿದರೆ ಏರುಪೇರು ಎಂಬ ಪಾಠವಂತೂ ಕಲಿತೆ.
     





ಒಂದು ನೋಟ ಎರಡು ಮಾತು....


  ಅದೇ ಮೊದಲು. ಅಷ್ಟು ದೀರ್ಘವಾಗಿ ನೋಡುತ್ತಿರುವುದು. ಅದೇನೋ ಆಕರ್ಷಣೆ ಅವಳ ನೋಟದಲ್ಲಿತ್ತು. ಈ ಮೊದಲು ಕ್ಯಾಂಪಸ್ನಲ್ಲಿ ಎಲ್ಲಿಯೂ ನೋಡಿದ ನೆನಪಿಲ್ಲ. ಕ್ಯಾಂಪಸ್ಗೆ ಹೊಸಬಳಾ ಅಥವಾ ಅವಳಾ?        

 ಹೌದು, ಅದು ನಾನು ಡಿಗ್ರಿ ಓದುತ್ತಿದ್ದ ಸಮಯ. ಎಲ್ಲರಂತೆ ನಾನು ಕಾಲೇಜಿಗೆ ರೆಗ್ಯೂಲರ್ ವಿದ್ಯಾಥರ್ಿ. ನಮ್ಮ ಕಾಲೇಜಿಗೆ ಹೋಗಲು ಎರಡು ಬಸ್ಗಳನ್ನು ಬದಲಾಯಿಸಬೇಕಿತ್ತು. ಅದು ಫೆ.14 ನೇ ತಾರೀಖು. ಪ್ರೇಮಿಗಳ ದಿನ ಬೇರೆ! ಅಂದು ನಾನು ಎಂದಿನಂತೆ ನಿತ್ಯಕರ್ಮಗಳನ್ನು ಮುಗಿಸಿ ಬಸ್ ಸ್ಟಾಪ್ಗೆ ನಡೆದೆ. ಬಸ್ ಬರುವುದು ಸ್ವಲ್ಪ ತಡವಾಯಿತು. ಹಾಗೇ ಬಸ್ಸ್ಟಾಪ್ ಕ್ಯಾಂಟೀನ್ಗೆ ಹೋಗಿ ಟೀ ಕುಡಿದು ಪ್ಲಾಟ್ಫಾಮರ್್ನಲ್ಲಿ ಕುಳಿತೆ. ಆಗ ಒಬ್ಬ ಸುಂದರ ಹುಡುಗಿ ಬೈಕ್ ಮೇಲೆ ಬಂದು ಪಕ್ಕದಲ್ಲೇ ಕುಳಿತಳು. ಏಕೋ ಅವಳನ್ನು ಪದೇಪದೆ ನೋಡಬೇಕೆನಿಸಿತು. 'ಲವ್ ಅಟ್ ಫಸ್ಟ್ ಸೈಟ್' ಎಂದು ಸ್ನೇಹಿತರು ಹೇಳಿದ್ದು ನೆನಪಾಯಿತು.
  ಅವಳು ನನ್ನನ್ನೆ ದಿಟ್ಟಿಸಿ ನೋಡುತ್ತಿದ್ದಳು. ಖಚಿತಪಡಿಸಿಕೊಳ್ಳಲು ಹಿಂದೆ, ಮುಂದೆ ಗಮನಿಸಿದೆ. ಅಲ್ಲಿ ಇದ್ದದ್ದು ಇಬ್ಬರೆ. ನಾನು ಮತ್ತು ಅವಳು. ಇಬ್ಬರಲ್ಲೂ ಎಂಥದೋ ತವಕ. ಕೆಲ ಸಮಯ ನಮ್ಮನ್ನೆ ಮರೆತ ಅನುಭವ. ನನ್ನಲ್ಲಿ ಕಾತುರ. ಅವಳಲ್ಲಿ ನಾಚಿಕೆ. ಇಬ್ಬರು ಮೂಕವಿಸ್ಮಿತರಾಗಿ  ಹಾಗೆ ನಿಂತೆವು. ಅಷ್ಟರಲೇ ಅವಳು ಕಾಯುತ್ತಿದ್ದ ಸವಾರಿ ಬಂದಿತು. ಹೊರಟಳು. ನಾನು ನೋಡುತ್ತಲೇ ಇದ್ದೆ.  ಅವಳು ಕಿಟಕಿಯಿಂದ ಮುಖ ಹೊರ ಹೊರಚಾಚಿ ನಕ್ಕಳು! ನನ್ನ ಮುಖವು ಅರಿಳಿತು. ಕೈ ಹೇಳಲೋ ಬೇಡವೋ ಎನ್ನುತ್ತ ಟಾಟಾ ಮಾಡಿತ್ತು.

ಆ ದಿನದಿಂದ ಬಿಡದೆ ಅವಳ ನಗು ಕಾಡತೊಡಗಿತು. ಕಾರಣ ತಿಳಿಯುವ ಮೊದಲೇ ನಾ ಕಳೆದು ಹೋಗಿದ್ದೆ. ಮನಸ್ಸಿಗೆ ಮಾತ್ರ ಸಮಾಧಾನವಿರಲಿಲ್ಲ. ಆ ನಗುವಿಗೆ ರಾತ್ರಿಯಲ್ಲ ಚಡಪಡಿಸಿದೆ. ಮರುದಿನ ಪ್ರಾರಂಭವಾಯಿತು ನೋಡಿ ಹುಡುಕುವ ಅಭಿಯಾನ. ಮತ್ತದೇ ಸಮಯಕ್ಕೆ ಅಲ್ಲಿಯೇ ಕಾಯುತ್ತಿದ್ದೆ. ಮನಸ್ಸಿನ ಭಾವನೆಗಳು ಅಥರ್ೈಸಿದವೋ ಏನೋ. ಅವಳು ಅಲ್ಲಿ ಪ್ರತ್ಯಕ್ಷಳಾದಳು.  ಏನಾದರಾಗಲಿ ಅಂದು ಮಾತನಾಡಿಸಿಯೇ ತಿರಬೇಕೆಂದು ನಿರ್ಧರಿಸಿದೆ. ಆದರೆ, ಭಯ ಮಾತ್ರ ತಡೆಯುತ್ತಿತ್ತು. ಮತ್ತದೇ ದೂರದ ನೋಟ, ನಗು. 'ಮೌನವೇ ಪ್ರೀತಿಗೆ ಸಮ್ಮತಿ' ಎಂದು ನಾನು ನಂಬಿದ್ದೆ. ಅವಳು ನಿಂತಿದ್ದಾಳೆ. ನಾನು ನೋಡತ್ತಿದ್ದೇನೆ. ನೋಡುವುದು ಮಾತ್ರ ಮುಂದುವರಿದಿತ್ತು.

  ಅವಳು ರಾತ್ರಿಯಲ್ಲಾ ನೆನಪಾದಳು. ಅವಳಿಗೆ ನನ್ನ ಮೇಲೆ ಪ್ರೀತಿನಾ? ಸ್ನೇಹನಾ? ಎಂಬ ಹುಚ್ಚು ಆಲೋಚನೆ ನಿದ್ದೆಗೆಡಸಿತು. ಅವಳು ಪದೇ ಪದೇ ನನ್ನನ್ನೆ ನೋಡುವುದು, ಅದೇ ಸ್ಥಳದಲ್ಲಿ ನಿಲ್ಲುವುದು, ಕಾಯುವುದು, ಯಾಕೆ? ಯೋಚಿಸಿದೆ. ಅವಳಿಗೆ ಮಾತನಾಡಲು ಮುಜಗರವೇ. ಇಲ್ಲಾ ನಾನೇ ಮಾತನಾಡಿಸಲಿ ಎಂಬ ಅಭಿಲಾಷೆಯೆ. ಇರಬಹುದು. ನಾನೂ ಮಾತನಾಡಿಸದೇ ತಪ್ಪು ಮಾಡುತ್ತಿರುವೆ. ಮತ್ತೆ ಅದೇ ಸ್ಥಳಕ್ಕೆ ಹೋಗಿ ಕಾಯಬೇಕೆನಸಿತು. ಅಲ್ಲೇ ನಿಂತೆ. ಮಾತನಾಡಿಸಲೇಬೇಕು ಎಂಬ ಕಾತರದಲ್ಲಿ.

  ಅವಳು ಬಂದಳು. ನಾನು ಪರಿಚಯಕ್ಕೆ ಮುಂದಾದೆ. ಅಭಿಮಾನ ನಿರಾಕರಿಸಿತು. ಇಬ್ಬರಲ್ಲೂ ಸಣ್ಣ ಅಹಂಕಾರ ಮತ್ತು ತೃಪ್ತಿಭಾವ. ಅದು ಮಾತಿನಲ್ಲಲ್ಲ. ನೋಟದಲ್ಲಿ. ಅಂತರಂಗದಿ ಹೇಳಬೇಕೆಂದು ಸೋತಿದ್ದು, ಅದೇ ಮೊದಲು. ಅದೇ ಕೊನೆ. ಆಗೀನಿಂದಲೇ ನಮ್ಮಿಬ್ಬರಲ್ಲಿ ಆತ್ಮೀಯತೆ ಆರಂಭವಾಗಿತ್ತು.  ಆದರೆ, ಮಾತು ಹೊರ ಹೊಮ್ಮಲೇ ಇಲ್ಲ. ಯಾವುದೋ ಕಾಲದ ಸೆಳತಕ್ಕೆ ಒಳಗಾಗಿ ಪರಿಚಯದ ಸಮಯವನ್ನು ವ್ಯರ್ಥ ಮಾಡಿದೆ. ಅಂದಿನಿಂದ ಅವಳು ಕಾಣಿಸಲೇ ಇಲ್ಲ.

  ಆದರೆ, ಅವಳೀಗ ಮತ್ತೆ ಕ್ಯಾಂಪಸ್ನಲ್ಲಿ ಕಾಣಿಸಿದ್ದಾಳೆ. ಬಹುದಿನಗಳ ಹಿಂದೆ ಮಿಂಚಿ ಮರೆಯಾದವಳು. ಈಗ ಮನಸ್ಸು ಮತ್ತೆ ಹಳೆಯ ನೆನಪುಗಳನ್ನು ಕೆದಕುತ್ತಿದೆ. ಹೇಗೆ ಮಾತು ಪ್ರಾರಂಭಿಸುವದು ತಿಳಿಯುತ್ತಿಲ್ಲ. ನನ್ನ ಹಾಗೆ ಅವಳಿಗೂ ಅನ್ನಿಸಿರಬಹುದೆ ಎಂಬ ಯೋಚನೆ.   ಹೌದು ಈ ಹರೆಯವೇ ಹೀಗೆ. ಮಾಡಬೇಕಾದ ಸಮಯದಲ್ಲಿ ಮಾಡದೇ, ಹೇಳಬೇಕಾದದ್ದನ್ನು ಹೇಳದೆ ಕಳೆದುಕೊಂಡು ಪಶ್ಚಾತಾಪ ಪಡುತ್ತೇವೆ. ನಂತರ ದುರಂತ ಕಥೆಯ ನಾಯಕನಂತೆ ನಮ್ಮ ಪಾಡಾಗುತ್ತದೆ.
 ಈಗಲಾದರೂ, ಅವಳಿಂದ ಒಂದೇ ಒಂದು ನೋಟ, ಎರಡೇ ಎರಡು ಮಾತು ಬಯಸಿರುವೆ. ಅವಳು ಬರುವ ನಿರೀಕ್ಷೆಯಲ್ಲಿ ಕ್ಯಾಂಪಸ್ನ ಅದೇ ಸ್ಥಳದಲ್ಲಿ ಕಾಯುತ್ತಿರುವೆ.  ಫ್ರೆಂಡ್ಸ್ ನೀವೂ ಅಷ್ಟೆ ಯಾರ ಬಗ್ಗೆ ಏನಾದರೂ ಹೇಳಬೇಕೆನಿಸಿದರೆ ನೇರವಾಗಿ ಹೇಳಿಬಿಡಿ. ಅದು ತಪ್ಪೋ ಸರಿಯೋ ಬೇರೆ ಮಾತು. ಆಗ ಕಷ್ಟವೆನಿಸಿದರು ಮುಂದೆ ನೆಮ್ಮದಿಯಂತೂ ಸಿಗುತ್ತದೆ.
                                         
                         



Friday, 22 March 2013


ಈ ಜೀವ ನಿನ್ನದು ನೀನು ನನ್ನವಳು....

ಇನ್ನೂ ನನ್ನ ಜೊತೆ ಮಾತಡ್ಬೇಕು ಅಂತಾ ಅನ್ನಿಸ್ತಿಲ್ವಾ? ಅಥವಾ ಮಾತಾಡಬಾರ್ದು ಅಂತಾ ನಿರ್ಧರಿಸಿದ್ದಿಯಾ? ಇರಲಿ ಬಿಡು. ನಿನ್ನ ಸ್ವಭಾವ ಏನಂತ ಗೊತ್ತು. ನಿನ್ನ ಭಾವನೆಗಳನ್ನು ಕೆದಕಿದವನು ನಾನಲ್ಲವೇ? ಈಗ ಮಾತನಾಡು ಅಂದ್ರೇ.... ಸಾರಿ...! ನೀನು ಕೋಪಗೊಂಡಿರುವೆ ಅಂತ ಗೊತ್ತು. ಸಮಾಧಾನ ಹೇಳುವಷ್ಟು ಸಲುಗೆಯನ್ನು ಕಳೆದುಕೊಂಡಿರುವೆ. ಈಗೇಕೆ ನನ್ನ ಬಗ್ಗೆ ಯೋಚಿಸುತ್ತಿರುವೆ ಎಂದು ಮಾತ್ರ ಕೇಳಬೇಡ.

ಮತ್ತೇ ನಿನ್ನ ನೆನಪು ಯಾಕೆ ಮಾಡಿಕೊಂಡೇನೆಂದರೆ, ನಮ್ಮಿಬ್ಬರ ನಡುವಿನ ಪ್ರೇಮ ಮೈತ್ರಿ ಭಾವನೆಗಳನ್ನು ಬಿಚ್ಚಿಡಲು ಅಲ್ಲ. ಅಂತರಂಗದಲ್ಲಿ ಪ್ರೀತಿ ಮಹಲು ಕಟ್ಟಿದ್ದನ್ನು ನೆನಪಿಸಿಕೊಳ್ಳಲು ಅಲ್ಲ. ಯಾರ ಭಯವು ಇರದೆ ಕೈ ಕೈ ಹಿಡಿದು ಸಿಟಿಯನ್ನೇಲ್ಲ ಸುತ್ತಿದೇವಲ್ಲ ಅದನ್ನು ಹೇಳಲು ಅಲ್ಲ. ನಮ್ಮಿಬ್ಬರ ಮಧುರ ಪ್ರೀತಿಗೆ ಬೆಂಕಿ ಇಟ್ಟ ಆ ಸಮಯವನ್ನು ದೂಷಿಸಲು. ನನ್ನ ಪ್ರಾಮಾಣಿಕ ಪ್ರೀತಿಯ ತಿಳಿಸಲು.

ಆ ದಿನ ನಿನ್ನ ದುಃಖಭರಿತ ಭಾವನೆಗಳನ್ನು ನೋಡಿ ಒಂದು ಕ್ಷಣ, ನಾನು ಕ್ರೂರಿಯಾದನೇನೋ ಎಂದು ಅನ್ನಿಸಿತು. ಮುಂದಾಲೋಚನೆ ಇಲ್ಲದ ಮಾತುಗಳು, ಎಷ್ಟೇಲ್ಲ ನೋವಿಗೆ ಕಾರಣವಾಗುತ್ತವೆ ಎಂದು ಆಗಲೇ ಗೊತ್ತಾಗಿದು. ಇಲ್ಲಿಯವರೆಗೂ ಪ್ರಾಮಾಣಿಕ ಪ್ರೇಮಿ ಎಂದು ಹೇಳುತ್ತಿದ್ದೆ. ಆದರೆ, ಆ ಗಳಿಗೆಯಲ್ಲಿ ಮಾತಿನ ಮೇಲೆ ಸ್ಥಿಮೀತತೆಯನ್ನು ಕಳೆದುಕೊಂಡು ಬಿಟ್ಟಿದ್ದೆ. ಮಂಜು, ನನ್ನಿಂದ ಆ ರೀತಿಯ ಮಾತುಗಳು ಹೊರಡಲು ನಿನ್ನ ಮೇಲಿನ ಅತೀಯಾದ ವ್ಯಾಮೋಹವೆ ಕಾರಣ.

ನೆನಪಿದೆಯಾ. ನಿನ್ಯಾವಾಗಲೂ ಮನತಣಿಸಲೆಂದು ಹಾಡುತ್ತಿದ್ದೀಯಲ್ಲ, ನೂರು ಜನ್ಮಕ್ಕೂ ನೂರಾರು ಜನ್ಮಕ್ಕೂ ಒಲವಧಾರೆ ನೀ ಒಲೆದೊಲೆದು ಬಾರೇ ನೀ... ಆ ಹಾಡು ಇನ್ನೂ ಕಿವಿಯಲ್ಲಿ ಗುನುಗುತ್ತಿದೆ. ನಾವಿಬ್ಬರೂ ನೂರು ಕಾಲ ಜೊತೆಗಿರೋಣ ಅಂತ ಆಣೆ, ಪ್ರಮಾಣ ಮಾಡಿದ್ವಿ. ಆದ್ರೆ, ನನ್ನಿಂದ ಉಳಿಸಿಕೊಳ್ಳೊದಕ್ಕೆ  ಸಾಧ್ಯವಾಗಲಿಲ್ಲ. ಅದರಿಂದಾನೆ ನೀನು ಬಿಟ್ಟುಬಿಡದೆ ಜಗಳವಾಡಿದೆ. ನಾನು ನಿನಗೆ ಮೊದಲೆ ನನ್ನೆಲ್ಲ ವಿಷಯ ಹೇಲಿದ್ದೆ ಅಲ್ವಾ. ಎಂಗೇಜ್ಮೆಂಟ್ ಆಗಿದ್ದು ಕೂಡಾ. ಆದ್ರೂ ನೀನು ತುಂಬಾ ಇಷ್ಟಾ ಪಟ್ಟೆ. ಪ್ರೀತಿ ಎಂಬುದೆ ಗೊತ್ತಿಲ್ಲದ, ನನ್ನ ಮನಸ್ಸಿನಲ್ಲಿ ಪ್ರೀತಿಯ ಭಾವನೆಗಳು ಚಿಗುರೊಡೆಯುವಂತೆ ಮಾಡಿದೆ. ಪ್ರೀತಿಯ ಸಿಹಿಭೋಜನ ಉಣಿಸಿದೆ. ಎಂದೂ ಗೊತ್ತೆ ಇರದ ಅಪ್ಪುಗೆ ನನ್ನಲ್ಲಿ ಬದಲಾವಣೆಯ ಗಾಳಿಯನ್ನೆ ಬೀಸಿತು.

"ಏಯ್..! ಕುಳ್ಳ ನೀ ನಂಗೆ ತುಂಬಾ ಇಷ್ಟಾ ಕಣೋ. ನಿನ್ನ ಬಿಟ್ಟು ಬದುಕೋ ಶಕ್ತಿ ಇಲ್ಲಾ ಲೇ. ನಮ್ಮ ಅಪ್ಪ ಅಮ್ಮಂಗೆ ಒಪ್ಪಸ್ತೇನಿ. ನನ್ನೆ ಮದ್ವೆ ಆಗೋ. ಅಂತೆಲ್ಲ ಪರಿ ಪರಿ ಕೇಳಿದ್ದಿ." ಆದ್ರೆ, ನಾನೊಬ್ಬ ಮೋಸಗಾರ ಅಂತ ನಿರೂಪಿಸಿ ಬಿಟ್ಟೆ. ನಿನ್ನ ಪ್ರೀತಿ, ನಂಬಿಕೆ, ವಿಶ್ವಾಸ ಉಳಿಸಿಕೊಳ್ಳದ ನಿರ್ಧಯಿ ಪ್ರೇಮಿಯಾದೆ. ಕ್ಷಮಿಸು...! ನಂಗೂ ಒಂದ್ ಮನಸ್ಸಿದೆ. ಅರ್ಥ ಮಾಡಿಕೋ. ನಾನೂ ಕೂಡಾ ಮನಸಾರೇ ಪ್ರೀತಿಸಿದೆ. ಸಂದರ್ಭದ ಸುಳಿಗೆ ಸಿಲುಕಿ ಏನೆಲ್ಲ ಸಂಭವಿಸಿತು.

ಮಂಜು, ಈಗ ತಪ್ಪಿನ ಅರಿವಾಗಿದೆ. ಸಂತೋಷದಿಂದ ಒಪ್ಪಿರುವೆ. ಮತ್ತು ಮನಪೂರ್ವಕ ನಿರ್ಧರಿಸಿರುವೆ. ನನ್ನ ಜೀವನವನ್ನ ನಿನ್ನ ಜೊತೆನೆ ಹಂಚಿಕೊಳ್ಳಬೇಕೆಂದು. ನಾನು ಕೂಡಾ ಸಂಪ್ರದಾಯಕ್ಕೆ ಇನ್ನು ಬೆಲೆ ಕೊಡಲಾರೆ. ನೆಮ್ಮದಿನೇ ಇಲ್ಲ ಅಂದ ಮೇಲೆ ಬೇರೊಬ್ಬರೊಡನೆ ಬದುಕುವದರಲ್ಲಿ ಅರ್ಥವಿಲ್ಲ. ನಿನಗೆ ಹಾಗೆಲ್ಲ ಹೇಳಿ ಮನಸ್ಸು ನೋಯಿಸಿರುವೆ. ಕ್ಷಮಿಸು. ಇನ್ನೆಂದು ನಿನ್ನ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳುವೆ. ನನ್ನ ಬದುಕಿನ ಅರ್ಧಭಾಗ ನೀನು. ನನ್ನ ಜೀವವಿರುವವರೆಗೂ ನನ್ನ ಕಣ್ಣ ರೆಪ್ರೆಯ ಹಾಗೆ ಜೋಪಾನ ಮಾಡುವೆ. ಕೊನೆಯವರೆಗೂ ಈ ಜೀವ ನಿನ್ನದು. ನೀನು ನನ್ನವಳು...!




  • ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ 
  • ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ 

Saturday, 5 January 2013

ಚಿಲುಮೆ...



ಕಾಣದಾಗಿವೆ   ಖಾಲಿ  ಪುಟಗಳು  
ಬಯಸಿದ ಮುದ್ರೆಯನ್ನೋತ್ತಲು 
ಹಣಕೊಟ್ಟು ಕೊಂಡುಕೊಳ್ಳಲು 
ಅಂಗಡಿ-ಮುಗ್ಗಟ್ಟುಗಳಲ್ಲಿ ದೊರೆಯವು 

ಅಡಿಗಡಿಗೂ ಹುಡಿಕಿದೆ 
ನನ್ನತನವ ಮರೆತು 
ಸೊಪ್ಪು ಹಾಕಿದರು ಗಮನಿಸುತ್ತಿಲ್ಲ 
ಸೋಲದಂತಹ ಮನಸ್ಸುಗಳು 

ಕೊನೆಗೂ ಬಯಸಿದೆ ಒಲವನ್ನ 
ಅವಳು ರೂಪವತಿ ಲಾವಣ್ಯವತಿ
ಅಲ್ಲವೇ ಅಲ್ಲ, ನನ್ನಲ್ಲಿ 
ಹೊಸತನ ಚಿಗುರಿಸಿದ ಯುವತಿ 

ಅವಳೊಡನೆ ಬೆಳೆಯಿತು ಸಲುಗೆ 
ಮರೆತು ಸಿಕ್ಕಾಕಿಕೊಂಡೆ ಪ್ರೀತಿಯ ಸುಳಿಗೆ
ಮೊದ-ಮೊದಲು ನಮ್ಮಲ್ಲಿ ಹೊಸತನ 
ನಮ್ಮಿಬ್ಬರ ನಡುವೆ ಅದು ವಿನೂತನ 

ಹಾರ ಬೇಕೆಂದೆವು ಬಾನಗಳದಲ್ಲಿ 
ಹಕ್ಕಿಯಂತೆ...
ಪ್ರೀತಿ ಸಿಂಹಾಸನದ ಒಲುಮೆಯಂತೆ 
ಹರೆಯದ ಚಿಲುಮೆಯಲ್ಲಿ....